ವಸುಂಧರಾ ರಾಜೆ ಸಿಂಧಿಯಾ (ಜನನ ೮ ಮಾರ್ಚ್ ೧೯೫೩) ಇವರು ಭಾರತೀಯ ಮಹಿಳಾ ರಾಜಕಾರಣಿ ಆಗಿದ್ದರು. ಇವರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಎರಡು ಅವಧಿಗಳನ್ನು ನಿರ್ವಹಿಸಿದ್ದಾರೆ. ಅವರು ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದರು. ಭಾರತದ ಮೊದಲ ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳ ಸಚಿವರಾಗಿದ್ದರು. ಇದನ್ನು ಈಗ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಎಂದು ಕರೆಯಲಾಗುತ್ತದೆ. ಅವರು ಪ್ರಸ್ತುತ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ಒಬ್ಬರು. ಇವರು ಸಿಂಧಿಯಾ ಕುಟುಂಬದ ಸದಸ್ಯೆ. == ಆರಂಭಿಕ ಜೀವನ == ವಸುಂಧರಾ ರಾಜೆ ಸಿಂಗ್ ಅವರು ೮ ಮಾರ್ಚ್ ೧೯೫೩ ರಂದು ಬಾಂಬೆಯಲ್ಲಿ (ಈಗ ಮುಂಬೈ) ಜನಿಸಿದರು. ಇವರು ಪ್ರಮುಖ ಸಿಂಧಿಯಾ ರಾಜಮನೆತನದವರು. ಇವರು ಶಿಂಧೆ ಮತ್ತು ಜಿವಾಜಿರಾವ್ ಸಿಂಧಿಯಾ ಅವರ ಮಗಳಾಗಿದ್ದರು. ರಾಜೆಯವರು ತಮಿಳುನಾಡಿನ ಕೊಡೈಕೆನಾಲ್‌ನಲ್ಲಿರುವ ಪ್ರೆಸೆಂಟೇಶನ್ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಮುಂಬೈನ ಸೋಫಿಯಾ ಕಾಲೇಜ್ ಫಾರ್ ವುಮೆನ್‌ನಿಂದ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನ ಪದವಿಗಳನ್ನು ಪಡೆದುಕೊಂಡಿದ್ದರು. == ವೈಯಕ್ತಿಕ ಜೀವನ == ೧೭ ನವೆಂಬರ್ ೧೯೭೨ ರಂದು ರಾಜಮನೆತನದ ಧೋಲ್ಪುರ್ ಕುಟುಂಬದ ಮಹಾರಾಜ್ ರಾಣಾ ಹೇಮಂತ್ ಸಿಂಗ್ ಅವರನ್ನು ವಿವಾಹವಾದರು. ಆದರೆ ಅವರು ಒಂದು ವರ್ಷದ ನಂತರ ಬೇರ್ಪಟ್ಟರು. ಅವರ ಮಗ ದುಶ್ಯಂತ್ ಸಿಂಗ್ ಅವರು ತಮ್ಮ ಹಿಂದಿನ ಕ್ಷೇತ್ರವಾದ ಜಲಾವರ್‌ನಿಂದ ಲೋಕಸಭೆಗೆ ಆಯ್ಕೆಯಾದರು. ಆಕೆಯ ಒಡಹುಟ್ಟಿದವರು ಮಧ್ಯಪ್ರದೇಶದ ಮಾಜಿ ಕೈಗಾರಿಕಾ ಸಚಿವ ಯಶೋಧರ ರಾಜೇ ಸಿಂಧಿಯಾ, ದಿವಂಗತ ಮಾಧವರಾವ್ ಸಿಂಧಿಯಾ,ತ್ರಿಪುರಾದ ಕೊನೆಯ ಆಡಳಿತ ಮಹಾರಾಜ ಕಿರಿತ್ ದೇಬ್ ಬರ್ಮನ್ ಅವರನ್ನು ವಿವಾಹವಾದ ದಿವಂಗತ ಪದ್ಮಾವತಿ ರಾಜೆ "ಅಕ್ಕಾಸಾಹೇಬ್" ಬರ್ಮನ್ (೧೯೪೨-೬೪),ನೇಪಾಳದ ರಾಣಾ ಕುಟುಂಬದವರವನ್ನು ವಿವಾಹವಾದ ಉಷಾ ರಾಜೆ ರಾಣಾ. == ಮಕ್ಕಳು == ಇವರಿಗೆ ಒಬ್ಬ ಮಗ ಇದ್ದಾನೆ. ಅವನ ಹೆಸರು ದುಶ್ಯಂತ್ ಸಿಂಗ್. ಇವನು ಲೋಕಸಭೆಯ ಮೂಲಕ ನಾಲ್ಕು ಬಾರಿ ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಧೋಲ್ಪುರದ ಯುವರಾಜನಾಗಿದ್ದನು. == ರಾಜಕೀಯ ವೃತ್ತಿಜೀವನ == ೧೯೮೪ ರಲ್ಲಿ, ರಾಜೆ ಭಾರತೀಯ ರಾಜಕೀಯ ವ್ಯವಸ್ಥೆಗೆ ಹೋದರು. ಮೊದಲಿಗೆ ಇವರು ಹೊಸದಾಗಿ ರೂಪುಗೊಂಡ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿ ನೇಮಕಗೊಂಡರು.ಇವರು ಧೋಲ್ಪುರದಿಂದ ೮ ನೇ ರಾಜಸ್ಥಾನ ಅಸೆಂಬ್ಲಿಯ ಸದಸ್ಯರಾಗಿ ಆಯ್ಕೆಯಾದರು. ಅದೇ ವರ್ಷದಲ್ಲಿ, ಅವರು ಯುವ ಮೋರ್ಚಾ, ರಾಜಸ್ಥಾನ ಬಿಜೆಪಿಯ ಉಪಾಧ್ಯಕ್ಷರಾಗಿ ನೇಮಕಗೊಂಡರು. === ಶಾಸಕಾಂಗ ಸಭೆಯ ಸದಸ್ಯತ್ವ === ೧೯೮೫-೧೯೯೦ ಸದಸ್ಯ, ಧೋಲ್‌ಪುರದಿಂದ ೮ನೇ ರಾಜಸ್ಥಾನ ೨೦೦೮-೨೦೧೩ ಸದಸ್ಯ, ಝಲ್ರಾಪಟನ್‌ನಿಂದ ೧೩ ನೇ ರಾಜಸ್ಥಾನ ಶಾಸಕಾಂಗ ಸಭೆ ೨೦೧೩-೧೮ ಸದಸ್ಯ, ೧೪ನೇ ರಾಜಸ್ಥಾನ ಶಾಸಕಾಂಗ ಸಭೆ ಝಲ್ರಾಪಟನ್‌ನಿಂದ ೨೦೧೮–ಪ್ರಸ್ತುತ, ಸದಸ್ಯ, ೧೫ನೇ ರಾಜಸ್ಥಾನದ ಝಲ್ರಾಪಟನ್ ಶಾಸಕಾಂಗ ಸಭೆ === ಸಂಸತ್ತಿನ ಸದಸ್ಯತ್ವಗಳು === ೧೯೮೯-೮೧ : ಸದಸ್ಯ, ೯ನೇ ಲೋಕಸಭೆ, ಜಲಾವರ್ ನಿಂದ . ೧೯೯೧-೯೬: ಸದಸ್ಯ, ೧೦ನೇ ಲೋಕಸಭೆ ೧೯೯೬-೯೮ : ಸದಸ್ಯ, ೧೧ನೇ ಲೋಕಸಭೆ ೧೯೯೮-೯೯ : ಸದಸ್ಯ, ೧೨ನೇ ಲೋಕಸಭೆ ೧೯೯೯-೦೩ : ಸದಸ್ಯ, ೧೩ ನೇ ಲೋಕಸಭೆ ೧೯೮೫-೮೭ : ಉಪಾಧ್ಯಕ್ಷರಗಿ ಇವರು ಯುವ ಮೋರ್ಚಾ ಬಿಜೆಪಿ, ರಾಜಸ್ಥಾನದಲ್ಲಿ ನೇಮಕಗೊಂಡಿದ್ದರು. ೧೯೮೭ : ಬಿಜೆಪಿಗೆ ಉಪಾಧ್ಯಕ್ಷರಾಗಿ , ರಾಜಸ್ಥಾನ ೧೯೯೦-೯೧ : ಸದಸ್ಯ, ಗ್ರಂಥಾಲಯ ಸಮಿತಿ, ಸದಸ್ಯ, ಸಲಹಾ ಸಮಿತಿ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ೧೯೯೧-೯೬ : ಸದಸ್ಯರು, ಸಲಹಾ ಸಮಿತಿಗಳು, ವಿದ್ಯುತ್, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ೧೯೯೬-೯೭ : ಸದಸ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯ ಸಮಿತಿ, ಸದಸ್ಯ, ಸಲಹಾ ಸಮಿತಿಗಳು, ವಿದ್ಯುತ್, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ೧೯೯೭-೯೮ : ಜಂಟಿ ಕಾರ್ಯದರ್ಶಿ, ಬಿಜೆಪಿ ಸಂಸದೀಯ ಪಕ್ಷ ೧೯೯೮-೯೯ : ಕೇಂದ್ರದ ರಾಜ್ಯ ಸಚಿವರು, ವಿದೇಶಾಂಗ ವ್ಯವಹಾರಗಳು ೧೩ ಅಕ್ಟೋಬರ್ ೧೯೯೧-೩೧ ಆಗಸ್ಟ್ ೨೦೦೧: ಕೇಂದ್ರ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ), ಸಣ್ಣ ಪ್ರಮಾಣದ ಕೈಗಾರಿಕೆಗಳು ಮತ್ತು ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳು; ಸಿಬ್ಬಂದಿ ಮತ್ತು ತರಬೇತಿ ಇಲಾಖೆ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದಲ್ಲಿ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ; ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ೧ ಸೆಪ್ಟೆಂಬರ್ ೨೦೦೧ - ೧ ನವೆಂಬರ್ ೨೦೦೧: ಕೇಂದ್ರ ರಾಜ್ಯ ಸಚಿವರು, ಸಣ್ಣ ಪ್ರಮಾಣದ ಕೈಗಾರಿಕೆಗಳು; ಸಿಬ್ಬಂದಿ, ತರಬೇತಿ, ಪಿಂಚಣಿಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳು; ಪರಮಾಣು ಶಕ್ತಿ ಇಲಾಖೆ; ಮತ್ತು ಡಿಪಾರ್ಟ್ಮೆಂಟ್ ಆಫ್ ಸ್ಪೇಸ್ (ಸ್ವತಂತ್ರ ಚಾರ್ಜ್) ೨ ನವೆಂಬರ್ ೨೦೦೧- ೨೯ ಜನವರಿ ೨೦೦೩ - ೮ ಡಿಸೆಂಬರ್ ೨೦೦೩: ಕೇಂದ್ರದ ರಾಜ್ಯ ಸಚಿವರು, ಸಣ್ಣ ಪ್ರಮಾಣದ ಕೈಗಾರಿಕೆಗಳು; ಸಿಬ್ಬಂದಿ, ತರಬೇತಿ, ಪಿಂಚಣಿಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳು; ಯೋಜನೆ; ಪರಮಾಣು ಶಕ್ತಿ ಇಲಾಖೆ; ಮತ್ತು ಡಿಪಾರ್ಟ್ಮೆಂಟ್ ಆಫ್ ಸ್ಪೇಸ್ (ಸ್ವತಂತ್ರ ಚಾರ್ಜ್) ೧೪ ನವೆಂಬರ್ ೨೦೦೨ - ೧೪ ಡಿಸೆಂಬರ್ ೨೦೦೩ - ಅಧ್ಯಕ್ಷರು, ಬಿಜೆಪಿ, ರಾಜಸ್ಥಾನ ೮ ಡಿಸೆಂಬರ್ ೨೦೦೩ - ೮ ಡಿಸೆಂಬರ್ ೨೦೦೮: ಮುಖ್ಯಮಂತ್ರಿ, ರಾಜಸ್ಥಾನ ೨ ಜನವರಿ ೨೦೦೯ - ೮ಡಿಸೆಂಬರ್ ೨೦೧೩: ವಿರೋಧ ಪಕ್ಷದ ನಾಯಕ, ರಾಜಸ್ಥಾನ ವಿಧಾನಸಭೆ ೮ ಡಿಸೆಂಬರ್ ೨೦೧೩- ೧೧ಡಿಸೆಂಬರ್ ೨೦೧೮: ಮುಖ್ಯಮಂತ್ರಿಯಾಗಿದ್ದರು, ರಾಜಸ್ಥಾನ ೧೧ ಜನವರಿ ೨೦೧೯ :ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. == ವೃತ್ತಿ == ವಸುಂಧರಾ ರಾಜೆ, ರಾಜಸ್ಥಾನ ಗೌರವ ಯಾತ್ರೆ ವಸುಂಧರಾ ರಾಜೆ, ಭಾಮಾಶಾ ಯೋಜನೆ ಸತ್ಯಂ ಕುಮಾರ್ ಮತ್ತು ವಸುಂಧರಾ ರಾಜೆ, ರಾಜಸ್ಥಾನ ವಸುಂಧರಾ ರಾಜೆ, ಜಲ ಸ್ವಾವಲಂಬನ್ == ಸಾಧನೆಗಳು == ೨೦೦೭ರಲ್ಲಿ, ಮಹಿಳೆಯರ ಸ್ವಯಂ-ಸಬಲೀಕರಣಕ್ಕಾಗಿ ಇವರು ಸಲ್ಲಿಸಿದ ಸೇವೆಗಳಿಗೆ ಇವರಿಗೆ ಯುಎನ್ಒ ನಿಂದ "ವುಮೆನ್ ಟುಗೆದರ್ ಅವಾರ್ಡ್" ದೊರಕಿದೆ. ೨೦೧೮ ರಲ್ಲಿ, ಅವರು ೫೨ ನೇ ಸ್ಕೋಚ್ ಶೃಂಗಸಭೆಯಲ್ಲಿ 'ವರ್ಷದ ಅತ್ಯುತ್ತಮ ಮುಖ್ಯಮಂತ್ರಿ' ಪ್ರಶಸ್ತಿಯನ್ನು ಪಡೆದರು. ವಸುಂಧರಾ ರಾಜೇ ಅವರ ಜೀವನದ ಕುರಿತಾದ ವಸುಂಧರಾ ರಾಜೇ ಔರ್ ವಿಕಸಿತ್ ರಾಜಸ್ಥಾನ ಎಂಬ ಪುಸ್ತಕವನ್ನು ಇತಿಹಾಸಕಾರರಾದ ವಿಜಯ್ ನಹರ್ ಬರೆದಿದ್ದಾರೆ. ಇದನ್ನು ಪ್ರಭಾತ್ ಪ್ರಕಾಶನದಿಂದ ಪ್ರಕಟಿಸಲಾಗಿದೆ. == ಸಹ ನೋಡಿ == ಎರಡನೇ ವಸುಂಧರಾ ರಾಜೇ ಮಂತ್ರಿಮಂಡಲ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==